ಕೌತುಕದ ಕಣ್ಣ ಮಿಂಚಿನಿಂದ

ಹೀಗೇ
ನಡೆಯುತ್ತಾ ನಡೆಯುತ್ತಾ
ಅರ್ಧದಲ್ಲೇ ಥಟ್ಟನೆ
ಎಲ್ಲ ನಿಂತು

ಗಾಳಿ ಸ್ತಬ್ಧ
ನೀರು – ಬೇರು ಸ್ತಬ್ಧ
ಜೀವ – ಜೀವನವೇ ಸ್ತಬ್ಧ!

ಎಲ್ಲ ಗಮ್ಮತ್ತುಗಳೂ
ಮೈ ಮುದುರಿ
ಕೌದಿ ಹೊದ್ದು ತೆಪ್ಪಗೆ
ಮಲಗಿಬಿಟ್ಟಿವೆಯೇ?

ಮದಿರೆಯ
ಬಟ್ಟಲೂ ಖಾಲಿ
ನಶೆಯೂ ಇಳಿದು
ಗಂಟೆಗಳೇ ಸರಿದಿವೆ!

ಗಮನಿಸಿಯೂ
ಗಮನಿಸದಂತೆ
ಮೌನ ಹೊದ್ದು
ಕೌತುಕದ ಕಣ್ಣರಳಿಸಿದೆ
ಸೂರ್ಯನ ಮೂರನೇ ಕಣ್ಣು!

ಕಾಯಿಸದೇ ಹಾಲಿನ ಕೆನೆಯೆಲ್ಲಿ?
ನೋಯಿಸದೇ ಹೊಮ್ಮುವ
ಜೀವವೆಲ್ಲಿ?

ಸೂರ್ಯನ ಕೌತುಕವ
ಕಣ್ಣಿನ ಮಿಂಚಿಂದ
ನಿಧಾನಕ್ಕಾದರೂ ಸರಿ
ಮತ್ತೆ ಹನಿ ಒಸರಬೇಕು
ಹಸಿಮಣ್ಣಲಿ ಬೀಜ
ಬಿತ್ತಬೇಕು
ಜೀವಂತಿಕೆ ಉಕ್ಕಬೇಕು

ಸ್ತಬ್ಧತೆಯ ಮೀರಿ
ಢಣಗುಡುವ ಘಂಟಾನಾದ
ಮೊಳಗಲೇಬೇಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಟ ಬಸವನ ಪ್ರೇಮ ಪುರಾಣ
Next post ಗೋಡ್ರ ಮಿಡ್‌ನೈಟ್ ಪ್ರೋಗ್ರಾಮು, ಸಡನ್ ಭಕ್ತ ಕನಕನಾದ ಸಿದ್ರಾಮು!

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys